Toggle Menu

ಕೆಂಡಸಂಪಿಗೆ

12:00 am - 12:00 am

ತನ್ನ ಬದುಕಲ್ಲಿ ಎಷ್ಟೇ ಮುಳ್ಳುಗಳಿದ್ದರೂ ವಠಾರದ ಜನಗಳ ಪಾಲಿಗೆ ಸುಮನಾ ಹೂವೇ. ಆ ಜನರ ನೆಮ್ಮದಿಗಾಗಿ ಅವಳು ಏನು ಮಾಡಲೂ ಸಿದ್ಧ. ಇನ್ನೊಂದು ಕಡೆ, ಎಂಎಲ್ಎ ಆಗುವ ಕನಸು ಕಾಣುತ್ತಿರುವ ರಾಜಕಾರಣಿ ತೀರ್ಥಂಕರ್ ಪ್ರಸಾದ್ ಈ ವಠಾರದ ಓಟುಗಳ ಮೇಲೆ ಕಣ್ಣಿಟ್ಟಿದ್ದಾನೆ. ಸಹಾಯ ಮಾಡುವ ನೆಪದಲ್ಲಿ ಸುಮನಾಗೆ ಹತ್ತಿರವಾಗುವ ತೀರ್ಥಂಕರ, ತನ್ನ ರಾಜಕೀಯ ಭವಿಷ್ಯದ ದುರುದ್ದೇಶದಿಂದ ಸಾಮೂಹಿಕ ಮದುವೆ ಮಂಟಪವೊಂದರಲ್ಲಿ ಅವಳನ್ನು ವಿವಾಹವೂ ಆಗಿಬಿಡುತ್ತಾನೆ. ಬಡ ಕುಟುಂಬದ ಹುಡುಗಿ ಸುಮನಾ ತನ್ನ ಹೊಸ ಸಿರಿವಂತ ಮನೆಗೆ ಹೇಗೆ ಹೊಂದಿಕೊಳ್ಳುತ್ತಾಳೆ? ಆ ಹಾದಿಯಲ್ಲಿ ಅವಳು ಪಟ್ಟ ಕಷ್ಟ ಕೋಟಲೆಗಳೇನು ಎನ್ನುವುದನ್ನು ಮನಮುಟ್ಟುವಂತೆ ನಿರೂಪಿಸುವ ಕಥೆಯೇ 'ಕೆಂಡಸಂಪಿಗೆ'.